ಜೈನ ಸಂಸ್ಕೃತಿಯಲ್ಲಿ ಅರಸರು , ಹೆಗ್ಗಡೆಯವರು, ಗುತ್ತು , ಬಕೆðಯವರು ಹೀಗೆ ನಾನಾ ರೀತಿಯಲ್ಲಿ ವಿಂಗಡಿಸಲಾಗಿದೆ. ಇದರ ಕುರಿತಾದ ಅಧ್ಯಯನ ಅಗತ್ಯ ಎಂದು ಧರ್ಮಸ್ಥಳದ ಧಮಾðಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನುಡಿದರು. ಅವರು ಉಜಿರೆಯ ಶ್ರೀ ಧ.ಮಂ ಪದವಿ ಕಾಲೇಜಿನ ಸಮ್ಯಕ್ ದರ್ಶನ ಸಭಾ ಭವನದಲ್ಲಿ ಡಾ. ಹಾಮಾನ ಸಂಶೋಧನಾ ಕೇಂದ್ರ ಹಾಗೂ ಕನ್ನಡ ಸಂಘದ ಸಹಯೋಗದೊಂದಿಗೆ ಹಂಪಿ ಕನ್ನಡ ವಿಶ್ವ ವಿದ್ಯಾನಲಯದ ಅಭೇರಾಜ್ ಬಲ್ಡೋಟ ಜೈನ ಸಂಸ್ಕೃತಿ ಅಧ್ಯಯನ ಪೀಠ ಆಯೋಜಿಸಿರುವ ಕನಾðಟಕದ ಜೈನ ಅರಸುಮನೆತನಗಳು ಸಾಂಸ್ಕೃತಿಕ ಅಧ್ಯಯನ ಕುರಿತಾದ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು
ಹಿಂದೂ ಸಂಸ್ಕೃತಿ ಹಾಗೂ ಜೈನ ಸಂಸ್ಕೃತಿಯ ಮಿಳಿತವಾಗಿದೆ ಇದರ ಕುರಿತ ಆಳ ಅಧ್ಯಯನ ಅಗತ್ಯ. ಜೈನ ಸಂಪ್ರದಾಯಗಳು ಅರಸು ಮನೆತನಗಳ ಕುರಿತು ಅಧ್ಯಯನ ಅಗತ್ಯ. ನಶಿಸಿಹೋಗುತ್ತಿರುವ ಅರಸರ ಮನೆತನದ ಉಳಿವಿಗಾಗಿ ಶ್ರಮಿಸಬೇಕು. ಈ ಕುರಿತ ನಮ್ಮ ಆಧ್ಯಯನದ ನೆಲೆ ಇರಬೇಕು. ದೇವಸ್ಥಾನಗಳಿಗೆ ಅರಸರ ಉಪಸ್ಥಿತಿ ಹಿಂದೆ ಅಗತ್ಯವಿತ್ತು. ಸಾಮಾಜಿಕವಾಗಿ ರಾಜಕೀಯವಾಗಿ ಧಾ«Äðಕ ವಿಚಾರದಲ್ಲಿ ಅರಸು ಮನೆತನದವರಿಗೆ ವಿಶೇಷ ಸ್ಥಾನಮನವಿತ್ತು. ಅಳಿವಿನಂಚಿನಲ್ಲಿರು ಅವರ ಮನೆತನಗಳ ಕುರಿತಾಗಿ ಸಂಶೋಧನೆ ನಡೆಯಬೇಕಿದೆ. ಈ ಸಂದರ್ಭದಲ್ಲಿ ಜೈನ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ. ಎನ್ ಚಿನ್ನಸ್ವಾಮಿ ಸೋಸಲೆ ರಚಿಸಿದ ಕನರ್ಾಟಕದಲ್ಲಿ ಶ್ವೇತಾಂಬರ ಜೈನ ಸಮಾಜ ಸಾಂಸ್ಕೃತಿ ಅಧ್ಯಯನ ಪುಸ್ತಕವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕನರ್ಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ, ಉಜಿರೆ ಶ್ರೀಧ.ಮಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ ಎಸ್ ಪ್ರಭಾಕರ್, ಕವಿಹಂನ ಡೀನ್ ಡಾ ವಿಜಯ್ ಪುಣಚ್ಚ ತಂಬಂಡ ಉಪಸ್ಥಿತರಿದ್ದರು ಡಾ. ಹಂಪ ನಾಗರಾಜಯ್ಯ ಆಶಯ ನುಡಿಗಳನ್ನು ನುಡಿದರು. ಡಾ. ಎನ್ ಚಿನ್ನಸ್ವಾಮಿ ಸೋಸಲೆ ಸ್ವಾಗತಿಸಿದರು ಡಾ. ಕೆವಿ ನಾಗರಾಜಪ್ಪ ವಂದಿಸಿದರು ಬಿ. ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
- ಚಂದ್ರಶೇಖರ್ ಎಸ್ ಅಂತರ
0 comments:
Post a Comment