ಬೆಳ್ತಂಗಡಿ: ಕ್ರೀಡೆ ಒಗ್ಗಟ್ಟಿನ ಪ್ರತೀಕ. ಸಾಮರಸ್ಯದ ಬಾಂಧವ್ಯ ಮೂಡಿಸಲು ಕ್ರೀಡೆ ಸಹಕಾರಿ. ಧಮಾðಂಧತೆಯನ್ನು ಅಳಿಸುವ ನಿಟ್ಟಿನಲ್ಲಿ ಕ್ರೀಡೆಯ ಪಾತ್ರ ಅನನ್ಯ ಎಂದು ಬೆಂಗಳೂರಿನ ಸಂತ ದೋಮಿನಿಕ್ ಚರ್ಚ್ ನ ಧರ್ಮಗುರುಗಳಾದ ಫಾ| ಜೋಸೆಫ್ ಡಿ'ಸೋಜ ತಿಳಿಸಿದರು.
ಅವರು ಮಡಂತ್ಯಾರಿನಲ್ಲಿ ಫ್ರೆಂಡ್ಸ್ ಮಡಂತ್ಯಾರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಶನ್ನ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ 5ನೇ ವರ್ಷದ ಅಂಗವಾಗಿ ನಡೆಯುತ್ತಿರುವ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕ್ರೀಡೆ ಜನರಲ್ಲಿರುವ ಧಮಾðಂಧತೆಯನ್ನು ತೆಯ ಹೊದಿಕೆಯನ್ನು ಕಳಚಿ ಒಗ್ಗಟ್ಟಿನ ಮಂತ್ರ ಜಪಿಸಲು ಸಹಕಾರಿ. ಕ್ರೀಡೆಯಿಂದ ದೈಹಿಕ ಸದೃಢತೆ ಜೊತೆಗೆ ಮಾನಸಿಕ ಸಮತೋಲನ ಕಾಪಾಡಲು ನೆರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ನ ಉಪಾಧ್ಯಕ್ಷ, ದ.ಕ ಜಿಲ್ಲಾ ಕಬಡ್ಡಿ ಅಸೋಸಿಯೇಶನ್ನ ಕಾರ್ಯದಶಿð ಪುರುಷೋತ್ತವು ಪುಜಾರಿ, ನಾಳ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಮಜಲು, ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು. ಫ್ರೆಂಡ್ಸ್ ಮಡಂತ್ಯಾರು ಸಂಘದ ಅಧ್ಯಕ್ಷ ಕೆ.ಜಿ ಸುಬ್ರಹ್ಮಣ್ಯ, ಉದ್ಯಮಿ ಭೋಜ ಎಮ್ ಶೆಟ್ಟಿ, ಸಂಜೀವ ಶೆಟ್ಟಿ ಮಗರೋಡಿ, ಕಿನ್ನಿಗೋಳಿಯ ಸಿವಿಲ್ ಕಂಟಾಕ್ಟರ್ ಜೋಕಿಂ ಸೇರಾ, ಬಸವನಗುಡಿಯ ಗಣೇಶ್ ವುಡ್ ಇಂಡಸ್ಟ್ರೀಸ್ನ ಮಾಲಕ ಪದ್ಮ ಮೂಲ್ಯ ಅನಿಲಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಉದ್ಘಾಟನಾ ಸಮಾರಂಭದ ಅಂಗವಾಗಿ ಏರ್ಪಡಿಸಲಾದ ಮೆರವಣಿಗೆಯನ್ನು ಕಿನ್ನಿಗೋಳಿಯ ಸಿವಿಲ್ ಕಂಟಾಕ್ಟರ್ ಜೋಕಿಂ ಸೇರಾ ಉದ್ಘಾಟಿಸಿದರು.
ಕ್ರೀಡಾಂಗಣವನ್ನು ಬಸವನಗುಡಿಯ ಗಣೇಶ್ ವುಡ್ ಇಂಡಸ್ಟ್ರೀಸ್ನ ಮಾಲಕ ಪದ್ಮ ಮೂಲ್ಯ ಅನಿಲಡೆ ಉದ್ಘಾಟಿಸಿದರು.
ಕೆ.ಜಿ ಸುಬ್ರಹ್ಮಣ್ಯ ಸ್ವಾಗತಿಸಿದರು, ದ.ಕ ಜಿಲ್ಲೆಯ ಕಬಡ್ಡಿ ತೀಪುðಗಾರರ ಸಂಚಾಲಕ ಫ್ರಾನ್ಸಿಸ್ ವಿವಿ ವಂದಿಸಿದರು. ರಾಜೀವ ಶೆಟ್ಟಿ ನಿರೂಪಿಸಿದರು.
- ಚಂದ್ರಶೇಖರ್ ಎಸ್ ಅಂತರ
0 comments:
Post a Comment