Tuesday 1 January 2013

ನವ ವರುಷ ನೀಡಲಿ ಬದುಕಿಗೆ ಹೊಸ ಸ್ಪರ್ಶ

2012 ಸರಿಯಿತು 2013 ಆಗಮನವಾಯಿತು.  ಹೀಗೆ ಯಾವುದೂ ಶಾಶ್ವತವಲ್ಲ. ಬದಲಾವಣೆ ಜಗದ ನಿಯಮ. ಜಗತ್ತಿನ ಕಾಲ ಚಕ್ರ ಅತಿ ವೇಗವಾಗಿ ಉರುಳುತ್ತಿದೆ. ಸಿಹಿ ಕಹಿಗಳ ಸುದ್ದಿಯ ನಡುವೆ ಜನರ ಜೀವನ ಸಾಗುತ್ತಿದೆ. ನಾಡಿನಲ್ಲಿ ಅತಂತ್ರ ರಾಜಕೀಯ, ಮಡೆ ಸ್ನಾನದ ಕೊಳೆ, ಹೋಂ ಸ್ಟೇ ದಾಳಿ, ವಿಧಾನ ಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ, ಎಂಡೋ ಪೀಡಿತರ ಬವಣೆ, ಅಷ್ಟ ಮಠಗಳ ಕಚ್ಚಾಟ, ನೀರಿಗಾಗಿ ಹೋರಾಟ, ನಕ್ಸಲ್ ಅಟ್ಟಹಾಸ, ಅತ್ಯಾಚಾರ, ನಕಲಿ ಸ್ವಾಮೀಜಿಗಳ ಧರ್ಮನಿಂದೆ ಹೀಗೆ ಹತ್ತು ಹಲವು ಕಳವಳಕಾರಿ ಬೆಳವಣಿಗೆಗಳು ಸಂಭವಿಸುತ್ತಿದೆ. 
2013 ವರುಷ ಸುಭದ್ರ ರಾಜ್ಯದ ವರುಷವಾಗಬೇಕು. ದುಷ್ಟ ಶಕ್ತಿಗಳ ದಮನವಾಗಬೇಕಿದೆ. ಶಾಂತಿ ಮಂತ್ರದೊಡನೆ ಸಹಬಾಳ್ವೆಯ ಬೀಜವನ್ನು ಬಿತ್ತಿ ನವ ಪರ್ವದ ನಾಂದಿ ಹಾಡಬೇಕಿದೆ. ಭಯೋತ್ಪಾದಕರ ಅಟ್ಟಹಾಸವನ್ನು  ಹೊಸುಕಿ ಹಾಕಬೇಕು.  ಕಪ್ಪುಹಣ, ಜನಲೋಕಪಾಲ್ ಮಸೂದೆ ಕನಸು ನನಸಾಗಬೇಕು. ಜನರ ಆಕಾಂಕ್ಷೆಗಳನ್ನು ಈಡೇರುಸುವಂತಹ ಸರಕಾರ ಬರಬೆಕು. ರಾಜಕೀಯ ಎಲ್ಲೂ ಸಲ್ಲದು. ಉತ್ತಮ ಆಡಳಿತ ಬೇಕು. ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಆಸೆಯಂತೆ ಭಾರತ ಸೂಪರ್ ಪವರ್ ಆಗಬೇಕು ಎನ್ನುವುದು ನಮ್ಮೆಲ್ಲರ ಹೆಬ್ಬಯಕೆ.
ಜನಪ್ರತಿನಿಧಿಗಳೆಂದು ಎನಿಸಿಕೊಂಡವರು ಜನರ ಬಯಕೆಗಳನ್ನು ಈಡೇರಿಸಬೇಕು. ನೀರಮೇಲಿನ ಗುಳ್ಳೆಯಂತೆ, ಆಕಾಶಕ್ಕೆ ರಂಗೋಲಿ ಹಾಕಿದಂತೆ ಜನಪ್ರತಿನಿಧಿಗಳು ಬೊಗಸೆ ಆಶ್ವಾಸನೆ ನೀಡದೆ ಜನರ ಹಿತಾಸಕ್ತಿ ಕಾಯಬೇಕಿದೆ. ಜವಾಬ್ದಾರಿಯ ಹೊಣೆ ಹೊರಬೇಕಿದೆ. ಅನ್ಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿ ಆರ್ಥಿಕ  ವ್ಯವಸ್ಥೆಗಳನ್ನು ಗಟ್ಟಿಗೊಳಿಸಬೇಕಿದೆ. ಒಟ್ಟಾರೆಯಾಗಿ ಭಾರತಕ್ಕೆ 2013 ದೇಶಕ್ಕೆ ಒಳಿತಾಗಬೇಕಿದೆ.
ನವ ವರುಷದ ಹೊಸ್ತಿಲಲ್ಲಿ ನಾಡಿಗೆ ಸುಭಿಕ್ಷೆಯಾಗಲಿ.  ಭ್ರ್ರಷ್ಟಾಚಾರ ಎಂಬ ದಂಧೆ ಸಂಪೂರ್ಣ ನಿರ್ಮುಲನೆಯಗಲಿ  ರೈತಿರಲ್ಲಿ ಸಂತಸದ ನಗು ತರಲಿ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಮಾತಿನಂತೆ ಸ್ತ್ರೀಯರು ರಾತ್ರಿ ವೇಳೆಯೂ ನಿರ್ಭೀತಿಯಿಂದ  ಸಂಚರಿಸುವಂತಾಗಲಿ. ಮೂಡನಂಬಿಕೆ ಎಂಬ ಪೆಡಂಭೂತ ಅಧ:ಪತನವಾಗಲಿ ಹೀಗೆ ಅದೆಷ್ಟೋ ಕನಸುಗಳು ಅಭಿಲಾಷೆಗಳು ನಮ್ಮಲ್ಲಿ ಅಡಕವಾಗಿದೆ. ಇವುಗಳನ್ನೆಲ್ಲಾ ಈಡೇರಿಸುವ ವರ್ಷ ಮುಂದಿನ 12 ತಿಂಗಳುಗಳಾಗಲಿ.
ಹೊಸ ವರುಷ ಎನ್ನುವುದು ಕೇವಲ ಒಂದು ದಿನದ ಸಾಂಕೇತಿಕ ಆಚರಣೆಯಾಗದೆ ಸದಾ ಮಾಸದ ಪರ್ವವಾಗಬೇಕಿದೆ.  ಹೊಸ ವರುಷದಂದು ಮಧ್ಯಪಾನ ಮಾಡಿ ಕುಸ್ತಿ ಮಸ್ತಿ ಮಾಡುವ ಬದಲು ನಮ್ಮ ಸಂಸ್ಕೃತಿಯನ್ನು ಕಾಪಾಡುವಂತಹ  ಆಚರಣೆಯಾಗಲಿ. ದೇವರ ಭಯವೇ ಜ್ಞಾನದ ಆರಂಭ ಎನ್ನುವಂತೆ ದೇವರ ನಾಮದೊಂದಿಗೆ ಹಿರಿಯರ ಆಶೀರ್ವವಾದದೊಂದಿಗೆ ಪ್ರಾರಂಭವಾದರೆ ಒಳಿತು ಎನ್ನುವುದು ಪುರಾಣದ ಮಾತುಗಳು.
ನವ ವರುಷ ನಾಡಿನಲ್ಲಿ ನವ ಯುಗದ ನಾಂದಿ ಹಾಡಲಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡುಯೂರಪ್ಪನವರ ಕನರ್ಾಟಕ ಜನತಾ ಪಕ್ಷ ರಾಜಕೀಯದಲ್ಲಿ ಹೊಸ ದಿಂಗತ ಸೃಷ್ಟಿಸಿದೆ. ಬೆಳಗಾವಿಯ ಸುವರ್ಣ ಸೌಧ, ಅಟಾಲ್ ಜನ ಸ್ನೇಹಿ ಕೇಂದ್ರ ಸಕಾಲ ಹೀಗೆ ಜನರಿಗಾಗಿ ಪ್ರಾರಂಭಿಸಿದ ಅನೇಕ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಜನರು ಬಳಸಿಕೊಂಡು ಮುಂದಿನ ಚುಣಾವಣೆಗೆ ಅಣಿಯಾಗುತ್ತಿರುವ ರಾಜಕೀಯ ಪಕ್ಷಗಳ ಒಳಿತು ಕೆಡುಕುಗಳನ್ನು ಅರಿತು ಜಾನ್ಮೆಯಿಂದ ಮತ ಚಲಾಯಿಸಿ ನವ ವರುಷದ ನವ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಬೇಕಿದೆ.
ಉದಯವಾಗಲಿ ಚೆಲುವ ಕನ್ನಡ ನಾಡು ಎನ್ನು ವ್ಯಾಖ್ಯಾನ ನಮ್ಮ ಧ್ಯೇಯವಾಗಬೇಕಿದೆ.  ದೇಶದಲ್ಲೂ ಹೊಸ ಅರುಣರಾಗ ಹಾಡಬೇಕಿದೆ. ಸೂರ್ಯ ಹೊಂಬೆಳಕು ಅಂಧಕಾರವನ್ನು ತೊಲಗಿಸಿ ಪ್ರಕಾಶಮನವಾದ ಜ್ಞಾನದ ದೀಪ ಬೆಳಗಬೆಕಿದೆ.  ಪಾಕಿಸ್ತಾನ ಭಾರತಕ್ಕೆ ಕ್ರಿಕೆಟ್ ಆಡಲು ಭಾರತಕ್ಕೆ ಆಗಮಿಸಿ ಎರಡು ದೇಶದ ಸಂಬಂಧಗಳ ವಿಚಾರಲ್ಲಿ ನೂತನ ವರ್ಷಕ್ಕೆ ಹೊಸ ಸೇತುವೆ ನಿರ್ಮಿಸಲು ಮುಂದಾಗಿದೆ ಇದೊಂದು ಉತ್ತಮ ಬೆಳವಣಿಗೆ ಇಂತಹ ಸಕರಾತ್ಮಕ ಬೆಳವಣಿಗೆಗಳು ನಿತ್ಯ ನರಂತರವಾಗಿ ನಡೆಯಬೇಕು ಎನ್ನುವುದು ನಮ್ಮ ಅಕಾಂಕ್ಷೆಯಾಗಿದೆ.
ಸರಾಯಿ ಹೆಂಡ ಕುಡಿಡು ಅರೆ ಪ್ರಜ್ಞಾವಸ್ತೆಯಲ್ಲಿ ಹೊಸ ವರುಷ ಆಚರಿಸಿ 'ಸತ್ ' ಪ್ರಜೆಗಳಾಗುವ ಬದಲು ಎಲ್ಲರೂ ಒಂದಾಗಿ ಮಾನವ ಧರ್ಮದ ಪರಿಕಲ್ಪನೆಯೊಂದಿಗೆ ಸುಜ್ಞಾನದ ದೀಪ ಹಚ್ಚಿ ಹೊಸ ವರುಷ ಆಚರಿಸಿ 2013ರಕ್ಕೆ ಉತ್ತಮ ನಾಂದಿ ಹಾಡೋಣ. 2013 ಹೊಸ ವರುಷದ ಶುಭಾಶಯಗಳು
- ಚಂದ್ರಶೇಖರ್ ಎಸ್ ಅಂತರ

1 comments:

Post a Comment

Share The Posts

Twitter Delicious Facebook Digg Stumbleupon Favorites More